Welcome to Sou. Mandakini Memorial Clinic: Premier Diabetic Foot Care Centre in Hubli, Karnataka.
At Sou. Mandakini Memorial Clinic in Hubli, Karnataka, we specialize in comprehensive diabetic foot care designed to prevent and treat complications associated with diabetes. Under the expert guidance of renowned specialists Dr. Sunil Kari, MS General Surgery (Senior Consultant Diabetic Foot Surgeon & Director) and Dr. Shashank Kari, MS, DrNB (Consultant Vascular, Endovascular) & Diabetic Foot Surgeon, we are dedicated to providing exemplary care to our patients suffering from diabetic foot issues.
To be world leaders in salvaging limbs & reduce the rate of amputations.
ಡಯಾಬೆಟಿಕ್ ಫುಟ್ - ಯಾವ ಋತು ಸುರಕ್ಷಿತ? - Mandakini Foot Care
ಬೇರೆ ಬೇರೆ ಋತುಗಳಲ್ಲಿ ಮಧುಮೇಹ ಪಾದಗಳಲ್ಲಿ ಉಂಟಾಗುವ ತೊಂದರೆಗಳು ಮತ್ತು ನಿಮ್ಮ ಪಾದದ ಆರೋಗ್ಯದ ಬಗ್ಗೆ ಮಾಹಿತಿ:
ಬೇಸಿಗೆ ಕಾಲದಲ್ಲಿ ಮಧುಮೇಹ ಪಾದಗಳಲ್ಲಿ ಉಂಟಾಗುವ ತೊಂದರೆಗಳು:
ಸಕ್ಕರೆ ಖಾಯಿಲೆ ಇರುವ ವ್ಯಕ್ತಿಗಳಿಗೆ ನರ ದೋಷ ಮತ್ತು ರಕ್ತನಾಳ ದೋಷ ಇರುವುದರಿಂದ ಬೇಸಿಗೆ ಕಾಲದಲ್ಲಿ ಬರಿಗಾಲಲ್ಲಿ ಹೊರಗೆ ಬಿಸಿಲಿನಲ್ಲಿ ಬರಲೇ ಬಾರದು ಇದರಿಂದ ತಮ್ಮ ಪಾದಗಳಿಗೆ ಬಿಸಿ ತಾಪಮಾನ ಗೊತ್ತಾಗದೆ ಕಾಲಿನ ಗಾಯ ಹೆಚ್ಚಾಗುವುದು. ಬಿಸಿಲಿನಲ್ಲಿ ಪಾದರಕ್ಷಗಳನ್ನು ಧರಿಸಿದರೂ ನರ ದೋಷ ಮತ್ತು ರಕ್ತನಾಳ ದೋಷ ಇರುವುದರಿಂದ ಬಿಸಿ ಅನುಭವ ತಮಗೆ ಬರದೇ ಬಿಸಿಲಿನಲ್ಲಿ ನಡಿಗೆ ಮುಂದುವರೆಸಿ ತೊಂದರೆಗೊಳಗಾಗುವರು. ಮತ್ತು ಇದನ್ನು ನಿರ್ಲಕ್ಷ್ಯೆ ಮಾಡಿದರೆ ಕಾಲಿನಲ್ಲಿ ಬೊಬ್ಬೆಗಳಾಗಿ ಸೋಂಕು ಮತ್ತು ಗ್ಯಾಂಗ್ರೀನ್ ಆಗುತ್ತದೆ.
ಚಳಿಗಾಲದಲ್ಲಿ ಮಧುಮೇಹ ಪಾದಗಳಲ್ಲಿ ಉಂಟಾಗುವ ತೊಂದರೆಗಳು:
ಚಳಿಗಾಲದಲ್ಲಿ ಗಾಳಿಯು ಶುಷ್ಕವಾಗಿರುತ್ತದೆ ಮತ್ತು ಚಳಿಗಾಲದಲ್ಲಿ ಸಕ್ಕರೆ ಖಾಯಿಲೆ ಇರುವವರಿಗೆ ಬೆವರು ಬರದೇ ಇರುವುದರಿಂದ ಡ್ರೈ ನೆಸ್ ನಿಂದಾಗಿ ನಿಮ್ಮ ಚರ್ಮವು ತೇವಾಂಶವನ್ನು ಕಳೆದುಕೊಳ್ಳಲು ಕಾರಣವಾಗಬಹುದು. ಇದರಿಂದ ತುರಿಕೆ ಉಂಟಾಗಿ ಗಾಯ ಹೆಚ್ಚಾಗುವುದು.
ಹೆಚ್ಚುವರಿಯಾಗಿ, ಪ್ರತಿದಿನ ನಿಮ್ಮ ಪಾದಗಳನ್ನು ತೇವಗೊಳಿಸುವುದು ಅತ್ಯಗತ್ಯ. ಮೃದುಗೊಳಿಸುವ ಪಾದದ ಕ್ರೀಮ್ ಅಥವಾ ಲೋಷನ್ ಅನ್ನು ಉಪಯೋಗಿಸಿದಾಗ ಈ ಪೋಷಣೆಯ ಅಂಶಗಳು ನಿಮ್ಮ ಚರ್ಮವನ್ನು ಆಳವಾಗಿ ಭೇದಿಸುತ್ತವೆ, ತೀವ್ರವಾದ ಜಲಸಂಚಯನವನ್ನು ಒದಗಿಸುತ್ತವೆ ಮತ್ತು ಶುಷ್ಕತೆ ಮತ್ತು ಬಿರುಕುಗಳನ್ನು ತಡೆಯುತ್ತದೆ.
ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ಪಾದಗಳನ್ನು ಮೃದುವಾಗಿ ಮತ್ತು ನಯವಾಗಿ ಇಟ್ಟುಕೊಳ್ಳಬೇಕು.
ಮಳೆಗಾಲದಲ್ಲಿ ಮಧುಮೇಹ ಪಾದಗಳಲ್ಲಿ ಉಂಟಾಗುವ ತೊಂದರೆಗಳು:
ಮಳೆಗಾಲದಲ್ಲಿ ನೀರಿನ ಅಂಶ ಬಹಳ ಇರವುದರಿಂಗ ಕಾಲುಗಳು ನೀರಲ್ಲಿ ನೆನೆದು ಬೆರಳುಗಳ ಮಧ್ಯ ಫಂಗಲ್ ಇನ್ಫೆಕ್ಷನ್ ಶಿಲೀಂದ್ರಗಳ ಸೋಂಕು ಉಂಟಾಗಿ ಗ್ಯಾಂಗ್ರಿನ್ ಆಗುವ ಅವಕಾಶಗಳು ಹೆಚ್ಚು.
ಆದ್ದರಿಂದ ಸಕ್ಕರೆ ಖಾಯಿಲೆ ಇರುವ ವ್ಯಕ್ತಿಗಳು ಎಲ್ಲ ಋತುವಿನಲ್ಲಿ ತಮ್ಮ ಪಾದದ ಸಂರಕ್ಷಣೆಯನ್ನು ಅತೀ ಕಾಳಜಿಯಿಂದ ಮಾಡಿಕೊಳ್ಳಬೇಕೆಂದು ನಮ್ಮ ಕಳಕಳಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಸೌ. ಮಂದಾಕಿನಿ ಕ್ಲಿನಿಕ್ ಹುಬ್ಬಳ್ಳಿಗೆ ಭೇಟಿ ಕೊಟ್ಟು ಡಾ. ಸುನಿಲ್ ಕರಿ ಅವರಿಂದ ಮಾಹಿತಿ ಪಡೆಯಬಹುದು.